Monday, 25 September 2017

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 6


ಪಂಚಮ ಆವರಣ ಕೃತಿ

ಶ್ರೀ ಕಮಲಾಂಬಾಯಾಃ   ರಾಗ: ಭೈರವಿ  ತಾಳ: ಮಿಶ್ರಛಾಪುತಾಳ

ಶ್ರೀ ಕಮಲಾಂಬಾಯಾಃ ಪರಂ ನಹಿ ರೇ ರೇ ಚಿತ್ತ
ಕ್ಷಿತ್ಯಾದಿ ಶಿವಾಂತ ತತ್ತ್ವ ಸ್ವರೂಪಿಣ್ಯಾಃ ||

ಶ್ರೀಕಂಠ ವಿಷ್ಣು ವಿರಿಂಚಾದಿ ಜನಯಿತ್ರಯಾಃ |
ಶಿವಾತ್ಮಕ ವಿಶ್ವಕತ್ರ್ಯಾಃ ಕಾರಯಿತ್ರ್ಯಾಃ ||

ಶ್ರೀಕರ ಬಹಿರ್ದಶಾರ ಚಕ್ರಸ್ಥಿತ್ಯಾ ಸೇವಿತ | ಭೈರವಿ ಭಾರ್ಗವಿ ಭಾರತ್ಯಾಃ ||

ನಾದಮಯ ಸೂಕ್ಷ್ಮರೂಪ ಸರ್ವಸಿದ್ಧಿ ಪ್ರದಾದಿ | ದಶ ಶಕ್ತ್ಯಾರಾಧಿತ ಮೂರ್ತೇಃ |
ಶ್ರೋತ್ರಾದಿ ದಶಕರಣಾತ್ಮಕ ಕುಳ ಕೌಳಿಕಾದಿ | ಬಹುವಿಧೋಪಾಸಿತ ಕೀರ್ತೇಃ |
ಅಭೇದ ನಿತ್ಯ ಶುದ್ಧ  ಬುದ್ಧ ಮುಕ್ತ | ಸಚ್ಚಿದಾನಂದಮಯ ಪರಮಾದ್ವೈತ ಸ್ಪೂರ್ತೇಃ |
ಆದಿ ಮದ್ಯಾಂತ ರಹಿತ ಪ್ರಮೇಯ | ಗುರುಗುಹ ಮೋದಿತ ಸರ್ವಾರ್ಥ ಸಾಧಕ ಪೂರ್ತೇಃ ||

ಮೂಲಾದಿ ನವಾಧಾರ ವ್ಯಾವೃತ್ತ ದಶಧ್ವನಿ ಬೇಧಜ್ಞ ಯೋಗಿ ವೃಂದ ಸಂರಕ್ಷಿಣ್ಯಾಃ |
ವಿನೋದ ಕರಣ ಪಟುತರ ಕಟಾಕ್ಷ ವೀಕ್ಷಣ್ಯಾಃ ||
.......…....….................…............
ಭೈರವಿರಾಗದ ಶ್ರೀ ಕಮಲಾಂಬಿಕಯಾಃ ಪರಂ ನಹಿ ರೇರೇ ಪಂಚಮ ನವಾವರಣ ರಚನೆಯು ಪಂಚಮಿ ವಿಭಕ್ತಿಯಲ್ಲಿದೆ. ಈ ಆವರಣದ ಹೆಸರು ಬಹಿದರ್ಶಾರ. ಚಕ್ರದ ಹೆಸರು ಸರ್ವಾರ್ಥ ಸಾಧಕ ಚಕ್ರ. ಚಕ್ರೇಶ್ವರಿಯ ಹೆಸರು ತ್ರಿಪುರಾಶ್ರೀ. ಯೋಗಿನಿಯ ಹೆಸರು ಕುಲೋತ್ತೀರ್ಣ ಯೋಗಿನಿ. ಹತ್ತು ತ್ರಿಕೋಣಗಳಿಂದ ಕೂಡಿದ ಈ ತ್ರಿಕೋಣಗಳ ಹೆಸರು ಇಂತಿವೆ.
ಸರ್ವಸಿದ್ಧಿಪ್ರದೇ, ಸರ್ವಸಂಪದ್ಪ್ರದೇ, ಸರ್ವಪ್ರಿಯಂಕರೀ, ಸರ್ವಮಂಗಳಕಾರಿಣೀ, ಸರ್ವಕಾಮಪ್ರದೇ, ಸರ್ವದುಃಖವಿಮೋಚನೀ, ಸರ್ವಮೃತ್ಯುಶಮನೀ, ಸರ್ವವಿಘ್ನನಿವಾರಿಣೀ, ಸರ್ವಾಂಗ ಸುಂದರೀ, ಸರ್ವಸೌಭಾಗ್ಯದಾಯಿನೀ.
ದೀಕ್ಷಿತರು ಪಲ್ಲವಿಯಲ್ಲಿ ಶ್ರೀ ಕಮಲಾಂಬಿಕಾಯಾಃ ಪರಂ ನಹಿ ರೇ ರೇ ಎಂದು ಹೇಳಿದ್ದಾರೆ. ಅಂದರೆ ಕಮಲಾಂಬಿಕೆಗಿಂತಲೂ ಬೇರೆ ಯಾವುದು ಇಲ್ಲವೇ ಇಲ್ಲ ಅಂದಿದ್ದಾರೆ. ಬ್ರಹ್ಮ, ವಿಷ್ಣು, ರುದ್ರರ ಜನನಿ ಇವಳು. ಶಿವಸ್ವರೂಪವಾದ ಪ್ರಪಂಚವನ್ನು ಸೃಷ್ಟಿಸುವವಳು, ಪಾಲಿಸುವವಳು ಇವಳೇ ಅಂದಿದ್ದಾರೆ. ಚರಣದಲ್ಲಿ ನಾದ ಸೂಕ್ಷ್ಮರೂಪಳೆಂದು ತಾಯಿಯನ್ನು ಹೊಗಳಿದ್ದಾರೆ. ದಶ ಶಕ್ತಿಗಳಿಂದ ಆರಾಧಿತಳೂ, ಬಹುವಿಧಗಳಿಂದ ಪೂಜೆಗೊಳ್ಳುವವಳೂ ಎಂದಿದ್ದಾರೆ. ಕೊನೆಯ ಪದವಾದ ಕಟಾಕ್ಷ ವೀಕ್ಷಣ್ಯಾಃ ಪದದ ಮೂಲಕ ತನ್ನ ಸಮರ್ಥವಾದ ಕಡೆಗಣ್ಣ ನೋಟವುಳ್ಳ ಕಮಲಾಂಬಿಕೆಗಿಂತ ಅನ್ಯ ಯಾವುದಿದೆ. ಅವಳೇ ಎಲ್ಲ , ಅವಳಿಂದಳೇ ಎಲ್ಲ ಎಂದು ದೀಕ್ಷಿತರು ಹೇಳಿದ್ದಾರೆ.

No comments:

Post a Comment