Tuesday, 26 September 2017

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 7


ಷಷ್ಠಮ ಆವರಣ ಕೃತಿ

ಕಮಲಾಂಬಿಕಾಯಾಃ   ರಾಗ: ಪುನ್ನಾಗವರಾಳಿ   ತಾಳ: ಆದಿತಾಳ

ಕಮಲಾಂಬಿಕಾಯಾಃ ತವ ಭಕ್ತೋಹಂ ಶ್ರೀ |
ಶಂಕರ್ಯಾಃ ಶ್ರೀಕರ್ಯಾಃ ಸಂಗೀತ ರಸಿಕಾಯಾಃ ಶ್ರೀ ||

ಸುಮಶರೇಷು ಕೋದಂಡ ಪಾಶಾಂಕುಶ ಪಾಣ್ಯಾಃ ||
ಅತಿ ಮಧುರತರ ವಾಣ್ಯಾಃ ಶರ್ವಾಣ್ಯಾಃ ಕಲ್ಯಾಣ್ಯಾ ||

ದಶಕಲಾತ್ಮಕ ವಹ್ನಿಸ್ವರೂಪ ಪ್ರಕಾಶಾಂತರ್ದಶಾರಾ | ಸರ್ವರಕ್ಷಾಕರ ಚಕ್ರೇಶ್ವರ್ಯಾಃ ||
ತ್ರಿದಶಾದಿನುತ ಕಚವರ್ಗದ್ವಯಮಯ ಸರ್ವಜ್ಞಾದಿ | ದಶಶಕ್ತಿ ಸಮೇತ ಮಾಲಿನಿ ಚಕ್ರೇಶ್ವರ್ಯಾಃ |
ತ್ರಿದಶವಿಂಶದ್ವರ್ಣ ಗರ್ಭಿಣೀ ಕುಂಡಲಿನ್ಯಾಃ | ದಶಮುದ್ರಾ ಸಮಾರಾಧಿತ ಕೌಳಿನ್ಯಾಃ ||
ದಶರಥಾದಿನುತ ಗುರುಗುಹ ಜನಕ ಶಿವ ಬೋಧಿನ್ಯಾಃ | ದಶಕರಣವೃತ್ತಿ ಮರೀಚಿ ನಿಗರ್ಭ ಯೋಗಿನ್ಯಾಃ ಶ್ರೀ ||
   ………………………………………………………………………………………………………

  ಶ್ರೀಚಕ್ರದ ಆರನೆಯ ಆವರಣದ ರಚನೆಯಾದ ಶ್ರೀ ಕಮಲಾಂಬಿಕಯಾಸ್ತವ ಭಕತೋಹಂ ಕೃತಿಯು ಷಷ್ಠಿ ವಿಭಕ್ತಿಯಲ್ಲಿದೆ. ಹತ್ತು ತ್ರಿಕೋಣಗಳಿಂದ ಕೂಡಿದ ಈ ಆವರಣದ ಹೆಸರು ಅಂತರ್ದಶಾರ. ಚಕ್ರದ ಹೆಸರು ಸರ್ವರಕ್ಷಾಕರ ಚಕ್ರ. ಚಕ್ರೇಶ್ವರಿಯ ಹೆಸರು ತ್ರಿಪುರ ಮಾಲಿನಿ. ಯೋಗಿನಿಯ ಹೆಸರು ನಿಗರ್ಭ ಯೋಗಿನಿ. 
   ಈ ಆವರಣದಲ್ಲಿ ಹತ್ತು ತ್ರಿಕೋಣಗಳಿದ್ದು, ಅವುಗಳ ಹೆಸರು ಇಂತಿವೆ.
ಸರ್ವಜ್ಞೆ, ಸರ್ವಶಕ್ತೇ, ಸರ್ವೈಶ್ವರ್ಯಪ್ರದೇ, ಸರ್ವಜ್ಞಾನಮಯೀ, ಸರ್ವವ್ಯಾಧಿನಿವಾರಿಣೀ, ಸರ್ವಾಧಾರ ಸ್ವರೂಪೇ, ಸರ್ವಪಾಪಹರೇ, ಸರ್ವಾನಂದಮಯೀ, ಸರ್ವರಕ್ಷಾಸ್ವರೂಪಿಣೀ, ಸರ್ವೇಪ್ಸಿತಫಲಪ್ರದೇ.
ಈ ಕೃತಿಯ ಪಲ್ಲವಿಯ ಸಾಹಿತ್ಯವೇ ಅದ್ಭುತ. ಶಂಕರನ ಮಡದಿಯೂ, ಶ್ರೀಕರಿಯೂ, ಸಂಗೀತ ರಸಿಕೆಯೂ ಆದ ಶ್ರೀ ಕಮಲಾಂಬಿಕೆಯ ಭಕ್ತನು ನಾನು ಎಂದು ದೀಕ್ಷಿತರು ಕೃತಿಯಲ್ಲಿ ಹೆಮ್ಮೆಯಿಂದ ಹೇಳಿದ್ದಾರೆ.
  ಅನುಪಲ್ಲವಿಯ ಸಾಹಿತ್ಯದಲ್ಲಿ ಪುಷ್ಪಬಾಣವನ್ನೂ , ಕಬ್ಬಿನ ಬಿಲ್ಲನ್ನೂ, ಪಾಶಾಂಕುಶವನ್ನು ಹಿಡಿದಿರುವವಳು ಎಂಬ ಪದವು ಮನೋರೂಪೇಕ್ಷುಕೋದಂಡ(10), ಪಂಚತನ್ಮಾತ್ರ ಸಾಯಕ(11) ಎಂಬ ಲಲಿತಾಸಹಸ್ರನಾಮದ 10,11ನೇ ನಾಮದ ಪ್ರತಿರೂಪದಂತಿದೆ.
  ಚರಣ ಸಾಹಿತ್ಯದಲ್ಲಿ ದೀಕ್ಷಿತರು ವೈಶಿಷ್ಟ್ಯಪೂರ್ಣವಾದ ಕವಿತಾಶಕ್ತಿಯನ್ನು ನೋಡಬಹುದು. ಇಲ್ಲಿ ದಶ ಎಂಬ ಪದ ಆರು ಸಲ ಬಳಸಲ್ಪಟ್ಟಿದೆ. ಅವುಗಳು ಇಂತಿವೆ. 1.ದಶಕಲಾತ್ಮಕ, 2. ಪ್ರಕಾಶಾಂತರ್ದಶಾರಾ, 3. ತ್ರಿದಶಾದಿನುತ, 4. ದಶಶಕ್ತಿ ಸಮೇತ ಮಾಲಿನಿ, 5. ತ್ರಿದಶವಿಂಶದ್ವರ್ಣ, 6. ದಶಮುದ್ರಾ ಸಮಾರಾಧಿತ. 
ಕೃತಿಯಲ್ಲಿ ಬಳಸಲ್ಪಟ್ಟ ಶ್ರೀ ಲಲಿತಾ ಸಹಸ್ರನಾಮದ ನಾಮಗಳು - ಶಂಕರ್ಯಾಃ (ಶ್ರೀ ಲಲಿತಾ ಸಹಸ್ರನಾಮದ 126ನೇ ನಾಮ),  ಶ್ರೀಕರ್ಯಾಃ (ಶ್ರೀ ಲಲಿತಾ ಸಹಸ್ರನಾಮದ 127ನೇ ನಾಮ), ಶರ್ವಾಣ್ಯಾಃ (ಶ್ರೀ ಲಲಿತಾ ಸಹಸ್ರನಾಮದ 124ನೇ ನಾಮ),  ದಶಮುದ್ರಾ ಸಮಾರಾಧಿತ (ಶ್ರೀ ಲಲಿತಾ ಸಹಸ್ರನಾಮದ 977ನೇ ನಾಮ), ಕೌಲಿನ್ಯಾಃ (ಶ್ರೀ ಲಲಿತಾ ಸಹಸ್ರನಾಮದ 94ನೇ ನಾಮ).

No comments:

Post a Comment