ಧ್ಯಾನ ಕೃತಿ
ಕಮಲಾಂಬಿಕೇ ರಾಗ: ತೋಡಿ ತಾಳ: ರೂಪಕ ತಾಳ
ಕಮಲಾಂಬಿಕೇ ಆಶ್ರಿತ ಕಲ್ಪಲತಿಕೇ ಚಂಡಿಕೇ
ಕಮನೀಯಾರುಣಾಂಶುಕೇ ಕರವಿಧೃತ ಶುಕೇ ಮಾಮವ ||
ಕಮಲಾಸನಾದಿ ಪೂಜಿತ ಕಮಲ ಪದೇ ಬಹುವರದೇ |
ಕಮಲಾಲಯ ತೀರ್ಥ ವೈಭವೇ ಶಿವೇ ಕರುಣಾರ್ಣವೇ || | ಶ್ರೀ ಕಮಲಾಂಬಿಕೇ |
ಸಕಲ ಲೋಕನಾಯಿಕೇ ಸಂಗೀತರಸಿಕೇ |
ಸುಕವಿತ್ವ ಪ್ರದಾಯಿಕೇ ಸುಂದರೀ ಗತಮಾಯಿಕೇ |
ವಿಕಳೇಬರ ಮುಕ್ತಿದಾನ ನಿಪುಣೇ ಅಘಹರಣೇ |
ವಿಯದಾದಿ ಭೂತ ಕಿರಣೇ ವಿನೋದ ಚರಣೇ ಅರುಣೇ || | ಶ್ರೀ ಕಮಲಾಂಬಿಕೇ |
ಸಕಲೇ ಗುರುಗುಹ ಚರಣೇ | ಸದಾಶಿವಾಂತಃ ಕರಣೇ |
ಅಕಚಟತಪಾದಿ ವರ್ಣೇ | ಅಕSಂಡೈಕ ರಸಪೂರ್ಣೇ || | ಶ್ರೀ ಕಮಲಾಂಬಿಕೇ |
ಈ ರಚನೆ ಕಮಲಾಂಬಾ ನವಾವರಣ ಕೃತಿಗಳಿಗೆ ಧ್ಯಾನ ಕೃತಿಯಾಗಿದೆ. ಇನ್ನು ಮುಂದೆ ಬರುವ ಹತ್ತು ರಚನೆಗಳು ಕಮಲಾಂಬಿಕೆ ಎಂಬ ನಾಮದಿಂದಲೇ ಆರಂಭಗೊಳ್ಳುವುದು. ಇಲ್ಲಿನ ವಿಶೇಷವೆಂದರೆ ಎಲ್ಲಾ ವಿಭಕ್ತಿಗಳಲ್ಲೂ ಕ್ರಮವಾಗಿ ರಚನೆಯಾಗುವುದರಿಂದ ಈ ರಚನೆಗಳನ್ನು ‘ಕಮಲಾಂಬಾ ವಿಭಕ್ತಿ ಕೃತಿಗಳು’ ಎಂದು ಕರೆಯಲಾಗುತ್ತದೆ. ನವರಾತ್ರಾರಂಭದ ದಿನ ಅಂದರೆ ಪಾಡ್ಯದಂದು ಈ ತೋಡಿರಾಗದ ಕಮಲಾಂಬಿಕೇ ಧ್ಯಾನಕೃತಿಯನ್ನು ಹಾಡಿ, ನಂತರ ಆನಂದಭೈರವಿ ರಾಗದ ‘ಶ್ರೀ ಕಮಲಾಂಬ ಸಂರಕ್ಷತುಮಾಂ’ ಕೃತಿ ಹಾಡುವುದು ಸಂಪ್ರದಾಯ.
ತೋಡಿ ರಾಗದ ಈ ಕೃತಿಯಲ್ಲಿ ದೀಕ್ಷಿತರ ಅತಿಶಯವಾದ ಭಕ್ತಿ, ಜ್ಞಾನ, ಶ್ರದ್ಧೆಯು ಗೋಚರಿಸಲ್ಪಡುತ್ತದೆ. ದೇವಿಯನ್ನು ವಿವಿಧ ನಾಮಗಳಿಂದ ಹಾಡಿ ಹೊಗಳಿದ್ದಾರೆ. ಈ ಕೃತಿಯು ಮುಂದಿನ ಹತ್ತು ಕೃತಿಗಳಿಗೆ ಪೀಠಿಕಾರೂಪದಲ್ಲಿದೆ. ಇಲ್ಲಿ ದೀಕ್ಷಿತರ ಅಕ್ಷರ ಪ್ರೌಢಿಮೆ ಸ್ಪಷ್ಟವಾಗಿ ಗೋಚರಿಸುತ್ತದೆ.
ಕಮಲಾಂಬಿಕೇ ಆಶ್ರಿತ ಕಲ್ಪಲತಿಕೇ ಚಂಡಿಕೇ | ಕಮನೀಯಾರುಣಾಂಶುಕೇ ಕರವಿಧೃತ ಶುಕೇ ಮಾಮವ ||
ಕಮಲಾಸನಾದಿ ಪೂಜಿತ ಕಮಲ ಪದೇ ಬಹುವರದೇ | ಕಮಲಾಲಯ ತೀರ್ಥ ವೈಭವೇ ಶಿವೇ ಕರುಣಾರ್ಣವೇ ||
ಪಲ್ಲವಿ ಮತ್ತು ಅನುಪಲ್ಲವಿಯ ಈ ಸಾಹಿತ್ಯ ಶ್ರೀಲಲಿತಾ ತ್ರಿಶತಿಯ ಕಕಾರಾದಿ ನಾಮಗಳ ಹಾಗೆ ಕಂಡುಬರುತ್ತದೆ.
ಚರಣ ಸಾಹಿತ್ಯದ ಸುಕವಿತ್ವಪ್ರದಾಯಿಕೆ (ಶ್ರೇಷ್ಠ ಕವಿತಾಶಕ್ತಿಯನ್ನು ಅನುಗ್ರಹಿಸುವವಳು) ಪದವನ್ನು ಗಮನಿಸಿದರೆ ದೀಕ್ಷಿತರು ಮುಂದಿನ ತಮ್ಮ ರಚನೆಗೆ ಪ್ರೇರಕಳಾಗಿ ಅನುಗ್ರಹಿಸು ಎಂದು ದೈನ್ಯತೆಯಿಂದ ತಾಯಿಯನ್ನು ಬೇಡಿದಂತಿದೆ. ಕೃತಿಯ ಕೊನೆಯ ಸಾಲು ಅಕಚಟತಪಾದಿ ವರ್ಣೇ, ಅSಂಡೈಕ ರಸಪ್ರರ್ಣೇ ಎಂಬ ಸಾಹಿತ್ಯ ದೀಕ್ಷಿತರು ಕಮಲಾಂಬಿಕೆಯನ್ನು ಮೈನವಿರೇಳಿಸುವಂತೆ ಸ್ತುತಿಸುತ್ತಿರುವಂತೆ ಕಾಣುತ್ತದೆ.
……………………………………………………………………………
ಪ್ರಥಮ ನವಾವರಣ ಕೃತಿ
******************************
ಕಮಲಾಂಬಾಂ ಸಂರಕ್ಷತುಮಾಂ ರಾಗ: ಆನಂದ ಭೈರವಿ ತಾಳ: ಮಿಶ್ರಛಾಪುತಾಳ
ಕಮಲಾಂಬಾಂ ಸಂರಕ್ಷತು ಮಾಂ | ಶ್ರೀಹೃತ್ ಕಮಲಾ ನಗರ ನಿವಾಸಿನೀ ||
ಸುಮನ ಸಾರಾದಿತಾಬ್ಜಮುಖೀ | ಸುಂದರ ಮನ ಪ್ರಿಯಕರ ಸಖೀ
ಕಮಲಜಾನಂದ ಭೋಧ ಸುಖೀ | ಕಾಂತಾತಾರ ಪಂಜರ ಶುಕೀ ||
ತ್ರಿಪುರಾದಿ ಚಕ್ರೇಶ್ವರೀ ಅಣಿಮಾದಿ ಸಿದ್ಧೀಶ್ವರೀ |
ನಿತ್ಯ ಕಾಮೇಶ್ವರೀ ಕ್ಷಿತ್ರಿಪುರಾದಿ ತ್ರೈಲೋಕ್ಯ ಮೋಹನ
ಚಕ್ರವರ್ತಿನೀ ಪ್ರಕಟಯೋಗಿನೀ |
ಸುರರಿಪು ಮಹಿಷಾಸುರಾದಿ ಮರ್ದಿನಿ |
ನಿಗಮ ಪುರಾಣಾದಿ ಸಂವೇದಿನೀ ||
ತ್ರಿಪುರೇಶಿ ಗುರುಗುಹ ಜನನೀ | ತ್ರಿಪುರ ಭಂಜನ ರಂಜನೀ |
ಮಧುರಿಪು ಸಹೋದರಿ ತಲೋದರಿ | ತ್ರಿಪುರ ಸುಂದರೀ ಮಹೇಶ್ವರೀ ||
………………………………………………………………
ಕಮಲಾಂಬಾ ಸಂರಕ್ಷತುಮಾಂ ಕೃತಿಯು ಶ್ರೀಚಕ್ರದ ಮೊದಲ ಆವರಣ ಕೃತಿ. ಪ್ರಥಮಾ ವಿಭಕ್ತಿ ಕೃತಿ. ಈ ಕೃತಿಯು ಶ್ರೀಚಕ್ರದ ಮೊದಲನೆಯ ಆವರಣವಾದ ಭೂಪುರ ಚಕ್ರವನ್ನು ಸಂಭೋಧಿಸುತ್ತದೆ. ಭೂಪುರದ ಚಕ್ರದ ಹೆಸರು ತ್ರೈಲೋಕ್ಯ ಮೋಹನ ಚಕ್ರ. ಚಕ್ರೇಶ್ವರಿಯ ಹೆಸರು ತ್ರಿಪುರಾ. ಯೋಗಿನಿಯ ಹೆಸರು ಪ್ರಕಟಯೋಗಿನಿ. ಈ ಎಲ್ಲಾ ವಿವರಗಳನ್ನು ದೀಕ್ಷಿತರು ಕೃತಿಯಲ್ಲಿ ಜಾಣ್ಮೆಯಿಂದ ಜೋಡಿಸಿದ್ದರೆ.
ಮೂರು ರೇಖೆಗಳಿರುವ ಭೂಪುರ ಚಕ್ರ
..........................................................
ಭೂಪುರ ಚಕ್ರದಲ್ಲಿ ಮೂರು ರೇಖೆಗಳಿದ್ದು ಮೊದಲನೆಯ ರೇಖೆಯಲ್ಲಿ ಅಣಿಮಾ, ಗರಿಮಾ, ಲಘಿಮಾ, ಮಹಿಮಾ, ಈಶಿತ್ವ, ವಶಿತ್ವ, ಪ್ರಾಪ್ತಿ, ಪ್ರಾಕಾಮ್ಯಗಳು ಎಂಬ ಅಷ್ಟ ಸಿದ್ಧಿಗಳಿವೆ.
ಎರಡನೆಯ ರೇಖೆಯಲ್ಲಿ ಅಷ್ಟ ಮಾತೃಕೆಯರಾದ ಬ್ರಾಹ್ಮಿ, ಮಾಹೇಶ್ವರಿ, ಕೌಮಾ
ಮೂರನೆಯ ರೇಖೆಯಲ್ಲಿ ಸರ್ವಸಂಕ್ಷೋಭಿಣಿ, ಸರ್ವವಿದ್ರಾವಿಣಿ, ಸರ್ವಾಕರ್ಷಿಣಿ, ಸರ್ವವಶಂಕರಿ, ಸರ್ವೋನ್ಮಾದಿನಿ, ಸರ್ವಮಹಾಂಕುಶೇ, ಸರ್ವಖೇಚರಿ, ಸರ್ವಬೀಜೇ, ಸರ್ವಯೋನಿ, ಸರ್ವತ್ರಿಖಂಡೇ ಎಂಬ ದಶಮುದ್ರಾ ದೇವತೆಗಳಿದ್ದಾರೆ.
ಕೃತಿಯ ಮೊದಲಿಗೆ ಬರುವ ಶ್ರೀಹೃತ್ ಕಮಲಾನಗರ ನಿವಾಸಿನಿ ಎಂಬ ಸಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಚಾಮುಂಡಿ, ನಾರಸಿಂಹಿಯರಿದ್ದಾರೆ.ಲು ದೀಕ್ಷಿತರು ಕಮಲಾಂಬೆಯು ನನ್ನ ಹೃದಯವೆಂಬ ಕಮಲಾನಗರದಲ್ಲಿ ವಾಸಿಸುತ್ತಿದ್ದಾಳೆಯೆಂದು ಹೇಳುವಂತಿದೆ. ಚರಣದಲ್ಲಿ ಅಣಿಮಾದಿ ಅಷ್ಟಸಿದ್ಧಿಗಳ ಒಡೆಯಳು ನಿತ್ಯಕಾಮೇಶ್ವರಿ ಎಂದಿದೆ. ಇದು ಲಲಿತಾ ಸಹಸ್ರನಾಮದ 391ನೇ ನಾಮ ನಿತ್ಯಷೋಡಶಿಕಾರೂಪಾ ಪ್ರತಿರೂಪದಂತಿದೆ.
{ನಿತ್ಯಷೋಡಶಿಕಾರೂಪಾ (16ಮಂದಿ ನಿತ್ಯೆಯರು) : ಕಾಮೇಶ್ವರೀ, ಭಗಮಾಲಿನಿ, ನಿತ್ಯಕ್ಲಿನ್ನಾ, ಭೇರುಂಡಾ, ವಹ್ನಿವಾಸಿನೀ, ಮಹಾವಜ್ರೇಶ್ವರಿ ಅಥವಾ ಮಹಾ ವಿದ್ಯೇಶ್ವರೀ, ಶಿವದೂತಿ, ತ್ವರಿತಾ, ಕುಲಸುಂದರೀ, ನಿತ್ಯಾ, ನೀಲಪತಾಕಿನೀ, ವಿಜಯಾ, ಸರ್ವಮಂಗಲಾ, ಜ್ವಾಲಾಮಾಲಿನೀ, ಚಿತ್ರಾ, ತ್ರಿಪುರಸುಂದರೀ ಇವರು ಹದಿನಾರು ನಿತ್ಯೆಯರು. ಮೊದಲಿನವಳಾದ ಕಾಮೇಶ್ವರಿಯ ಅಂಗಗಳೆಂದು ಉಳಿದ ಹದಿನೈದು ಮಂದಿ ನಿತ್ಯೆಯರು ಪ್ರಸಿದ್ಧರು.}
ಇಡಿ ಕೃತಿಯನ್ನು ಗಮನಿಸಿದಾಗ ದೀಕ್ಷಿತರು ಕಮಲಾಂಬೆಯನ್ನು ತ್ರಿಪುರಾ, ತ್ರಿಪುರೇಶಿ, ತ್ರಿಪುರ ಭಂಜನ ನಿರಂಜನಿ, ತ್ರಿಪುರ ಸುಂದರಿ ಎಂದು ಮನಃಪೂರ್ವಕವಾಗಿ ಬೇಡಿದ್ದಾರೆ ಅನಿಸುತ್ತದೆ. ತ್ರಿಪುರಾ (ಲಲಿತಾಸಹಸ್ರನಾಮದ 626ನೆ ನಾಮ ತ್ರಿಪುರಾ) ಎಂದರೆ ತ್ರಿಮೂರ್ತಿಗಳಿಗಿಂತಲೂ ಪುರಾತನಳಾದವಳು ಎಂದರ್ಥ ಬರುತ್ತದೆ. ತ್ರ್ರಿಪುರ ಎಂದರೆ ಸುಷಮ್ನಾ, ಇಡಾ, ಪಿಂಗಲಾ ಎಂಬ ಮೂರು ಬಗೆಯ ನಾಡಿಗಳು. ದೇವಿಯು ಇದರಲ್ಲಿ ಆವಾಸಳಾಗಿರುವುದರಿಂದ ತ್ರಿಪುರಾವೆಂದೆನಿಸಿಕೊಂಡಿದ್ದಾಳೆ.
ನಾಡೀತ್ರಯಂ ತ್ರಿಪುರಾ ಸುಷಮ್ನಾ ಪಿಂಗಲಾ ಇಡಾ |
ಮನೋ ಬುದ್ಧಿಸ್ತಥಾ ಚಿತ್ತಂ ಪ್ಮರತ್ರಯಮುದಾಹೃತಮ್ |
ತತ್ರ ತತ್ರ ವಸತ್ಯೇಷಾ ತಸ್ಮ್ಮಾತ್ತು ತ್ರಿಪುರಾ ಮತಾ ||
ಎಂದು ತ್ರ್ರಿಪುರಾರ್ಣವದಲ್ಲಿ ಹೇಳಿದೆ. ಅವಳ ಮಂಡಲವು ತ್ರಿಕೋಣ.
“ಸರ್ವಂ ತ್ರಯಂ ತ್ರಯಂ ಯಸ್ಮಾತ್ತಸ್ಮಾತ್ತು ತ್ರಿಪುರಾ ಮತಾ” ಎಲ್ಲವೂ ಮೂರು ಮೂರು ಆಗಿರುವುದರಿಂದ ತ್ರಿಪುರಾ ಎಂದೆನಿಸಿಕೊಂಡಿದ್ದಾಳೆ.
…………………………………………………………………………………………………………………………………………