Thursday, 8 March 2018

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 11

  ಶ್ರೀ ಕಮಲಾಂಬಿಕೇ ಶಿವೇ ಪಾಹಿಮಾಂ
  ರಾಗ: ಶ್ರೀ                          ತಾಳ: ಖಂಡ ಏಕತಾಳ


ಮಂಗಳ  ಕೃತಿ

ಶ್ರೀ ಕವiಲಾಂಬಿಕೇ ಶಿವೇ ಪಾಹಿಮಾಂ ಲಲಿತೇ |
ಶ್ರೀಪತಿ ವಿನುತೆ ಸಿತಾಸಿತೆ ಶಿವ ಸಹಿತೇ ||

ರಾಕಾ ಚಂದ್ರಮುಖೀ ರಕ್ಷಿತ ಕೋಲ ಮುಖೀ |
ರಮಾವಾಣೀ ಸಖೀ ರಾಜ ಯೋಗ ಸುಖೀ  ||


ಶಾಕಂಬರಿ ಶಾತೋದರಿ ಚಂದ್ರಕಲಾಧರಿ
ಶಂಕರಿ ಶಂಕರ ಗುರುಗುಹ ಭಕ್ತವಶಂಕರಿ
ಏಕಾಕ್ಷರಿ ಭುವನೇಶ್ವರಿ ಈಶಪ್ರಿಯಕರಿ
ಶ್ರೀಕರಿ ಸುಖಕರಿ ಶ್ರೀಮಹಾತ್ರಿಪುರಸುಂದರಿ
ಶ್ರೀಕರಿ ಶುಭಕರಿ ಶ್ರೀಮಹಾತ್ರಿಪುರಸುಂದರಿ ||


  ಶ್ರೀರಾಗದ ಈ ಕೃತಿಯು ಕಮಲಾಂಬಾ ನವಾವರಣ ಕೃತಿಗುಚ್ಛದ ಮಂಗಳಕೃತಿಯಾಗಿದೆ. ದೀಕ್ಷಿತರು ಮಂಗಳಕೃತಿಗೆ ಮಂಗಳರಾಗವಾದ ಶ್ರೀರಾಗವನ್ನೇ ಆಯ್ಕೆ ಮಾಡಿದ್ದಾರೆ.
   ಪಲ್ಲವಿಯಲ್ಲಿ ಕಮಲಾಂಬಿಕೇ ಲಲಿತೇ ಶಿವೇ ಸದಾ ನನ್ನನ್ನು ರಕ್ಷಿಸು ಎಂದಿದ್ದಾರೆ.
   ಸಮಷ್ಟಿ ಚರಣವಾದ ಈ ಕೃತಿಯಲ್ಲಿ ದೇವಿ ಕಮಲಾಂಬಿಕೆ ನಿನ್ನ ಮುಖ ಪೂರ್ಣಚಂದ್ರನಂತೆ ಕೊಂಗೊಳಿಸುತ್ತಿದೆ. ಲಕ್ಷ್ಮೀ-ಸರಸ್ವತಿಯರಿಗೆ ಸಖಿಯಾಗಿ, ರಾಜಯೋಗದಿಂದ ಸುಖಿಸುವವಳು ಎಂದಿದ್ದಾರೆ.
  ಶಾಕಾಂಬರಿ, ಶಾತೋದರಿ, ಚಂದ್ರನನ್ನು ಶಿರದಲ್ಲಿ ಧರಿಸಿದವಳು. ಶಂಕರ, ಷಣ್ಮುಖರ ಭಕ್ತರಿಗೆ ವಶಳಾದ ಶಂಕರಿಯೂ, ಏಕಾಕ್ಷರಿಯೂ, ಈಶಪ್ರ್ರಿಯಕರಿಯೂ, ಲಕ್ಷ್ಮೀಕರಳೂ, ಅಲ್ಲದೆ ಸುಖವನ್ನೂ, ಶುಭವನ್ನೂ ಅನುಗ್ರಹಿಸುವ ಶ್ರೀಮಹಾತ್ರಿಪುರಸುಂದರಿಯೇ ಸದಾ ರಕ್ಷಿಸು ಎಂದಿದ್ದಾರೆ.




No comments:

Post a Comment