ಶ್ರೀಮುತ್ತುಸ್ವಾಮಿ ದೀಕ್ಷಿತರ ಕೃತಿಗಳಲ್ಲಿ ಶ್ರೀಮಹಾಲಕ್ಷ್ಮಿ ವರ್ಣನೆ
ಕರ್ನಾಟಕ ಸಂಗೀತ ಕೃತಿಗಳಲ್ಲಿ ಸಾಮಾನ್ಯವಾಗಿ ವಸ್ತು ದೇವ-ದೇವಿಯರ ವರ್ಣನೆ ಹಾಗೂ ಪ್ರಾರ್ಥನಾ ರೂಪದಲ್ಲಿ ಇರುತ್ತದೆ. ಕರ್ನಾಟಕ ಸಂಗೀತದಲ್ಲಿ ತ್ರಿಮೂರ್ತಿಗಳೆನಿಸಿದ್ದ ಶ್ರೀಶ್ಯಾಮಾಶಾಸ್ತ್ರಿಗಳು, ಶ್ರೀತ್ಯಾಗರಾಜರು ಮತ್ತು ಶ್ರೀಮುತ್ತುಸ್ವಾಮಿ ದೀಕ್ಷಿತರು ಹಾಗೂ ಇತರ ವಾಗ್ಗೇಯಕಾರರ ಕೃತಿಗಳಲ್ಲಿ ಈರೀತಿಯ ಭಕ್ತಿಯ ನಿವೇದನೆ ಇದೆ. ಶ್ಯಾಮಾಶಾಸ್ತ್ರಿಗಳು ತಮ್ಮ ಆರಾಧ್ಯದೇವತೆ ಬಂಗಾರು ಕಾಮಾಕ್ಷಿಯ ಮೇಲೆ ಕೃತಿ ರಚನೆಮಾಡಿದರೆ, ತ್ಯಾಗರಾಜರು ತಮ್ಮ ಅಂತರಂಗ ಮೂರುತಿ ಶ್ರೀರಾಮನ ಕುರಿತ ಕೃತಿಗಳನ್ನೇ ಹೆಚ್ಚಾಗಿ ರಚಿಸಿದರು. ಇನ್ನುಳಿದವರಲ್ಲಿ ಕಿರಿಯವರಾದ ಮುತ್ತುಸ್ವಾಮಿ ದೀಕ್ಷಿತರು ಅದ್ವೈತಿಗಳು. ಇವರು ಕೃತಿರಚಿಸದ ದೇವಾನು ದೇವತೆಗಳೇ ಇಲ್ಲ ಎಂಬಷ್ಟರ ಮಟ್ಟಿಗೆ ಶಿವ, ವಿಷ್ಣು, ಗಣಪತಿ , ಸುಬ್ರಹ್ಮಣ್ಯ, ಹನುಮಂತ, ಕೃಷ್ಣ, ರಾಮ, ನವಗ್ರಹಗಳು, ಲಕ್ಷ್ಮಿ, ಸರಸ್ವತಿ, ದೇವಿ ಹೀಗೆ ಒಬ್ಬೊಬ್ಬ ದೇವತೆಗಳ ಕುರಿತು ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಇವರ ಲಕ್ಷ್ಮೀಪರ ಕೃತಿಗಳು ಸುಮಾರು ಒಂಭತ್ತು ಇದೆ. ಕರ್ನಾಟಕ ಸಂಗೀತದ ಇತರ ವಾಗ್ಗೇಯಕಾರರಾದ ಶ್ರೀಮುತ್ತಯ್ಯ ಭಾಗವತರು, ಶ್ರೀಮೈಸೂರು ವಾಸುದೇವಾಚಾರ್ಯರು ಹಾಗೂ ಶ್ರೀಜಯಚಾಮರಾಜೇಂದ್ರ ಒಡೆಯರು ಮುಂತಾದ ವರು ಲಕ್ಷ್ಮೀಪರ ಕೃತಿಗಳನ್ನು ರಚಿಸಿದ್ದರೂ ಸಂಖ್ಯೆಯ ದೃಷ್ಟಿಯಿಂದಲೂ, ಸಂಗೀತದ ದೃಷ್ಟಿಯಿಂದಲೂ ಮತ್ತು ಪ್ರಗಲ್ಭ ಪಾಂಡಿತ್ಯದ ದೃಷ್ಟಿಯಿಂದಲೂ ನೋಡಿದರೆ ದೀಕ್ಷಿತರ ಕೃತಿಗೆ ದೀಕ್ಷಿತರ ಕೃತಿಗಳೇ ಸಾಟಿ.
ದೀಕ್ಷಿತರು ಸಂಸಾರಿಯಾಗಿದ್ದುಕೊಂಡು ಸಂನ್ಯಾಸಿಯಾಗಿದ್ದವರು. ಹಾಗಾಗಿ ಇವರ ಕೃತಿಗಳು ಜ್ಞಾನ-ಭಕ್ತಿ-ವೈರಾಗ್ಯಗಳಿಂದ ಸಮ್ಮಿಲಿತವಾಗಿದೆ. ಅದಕ್ಕೆ ಉದಾಹರಣೆಯೆಂಬಂತೆ ಒಮ್ಮೆ ದೀಕ್ಷಿತರ ಮಡದಿಗೆ ಧನ-ಕನಕದ ಮೇಲೆ ಮೋಹ ಉಂಟಾಯಿತಂತೆ. ಅವರು ದೀಕ್ಷಿತರನ್ನು ಕುರಿತು ‘ನೀವು ತಂಜಾವೂರು ಮಹಾರಾಜರನ್ನು ಕುರಿತು ಕೃತಿ ರಚಿಸಿ ಆಸ್ಥಾನ ದಲ್ಲಿ ಹಾಡಿದರೆ ನಮಗೆ ದುಡ್ಡು ಒಡವೆ ಕೊಡಬಹುದು’ ಎಂದು ಸೂಚಿಸಿದರಂತೆ. ಆದರೆ ದೀಕ್ಷಿತರು ಮಹಾವಿರಕ್ತರು ಎಂದೂ ನರಸ್ತುತಿ ಮಾಡಿದವರಲ್ಲ. ‘ನಾನು ಆ ರೀತಿ ಎಂದೂ ಮಾಡುವುದಿಲ್ಲ ನಿನಗೆ ಐಶ್ವರ್ಯ ಬೇಕಾದರೆ ದೇವರನ್ನು ಪ್ರಾರ್ಥಿಸುತ್ತೇನೆ’ ಎಂದು ಮಹಾಲಕ್ಷ್ಮಿಯ ಕುರಿತು ‘ಲಲಿತಾ’ರಾಗದಲ್ಲಿ ‘ಹಿರಣ್ಮಯಿಂ ಲಕ್ಷ್ಮೀಂ ಸದಾ ಭಜಾಮಿ ಹೀನ ಮಾನವಾಶ್ರಯಾಂ ತ್ಯಜಾಮಿ’ ಎಂಬ ಕೃತಿ ರಚಿಸಿದರಂತೆ. ಅದೇ ದಿನ ರಾತ್ರಿ ದೀಕ್ಷಿತರ ಮಡದಿ ಕನಸಿನಲ್ಲಿ ಮಹಾಲಕ್ಷ್ಮಿ ಕಾಣಿಸಿಕೊಂಡು ಒಡವೆಗಳು ಸಾಕೇ ಎಂದು ಕೇಳಿದಂತಾಯಿತಂತೆ. ಮರುದಿನ ಬೆಳಿಗ್ಗೆ ‘ನನ್ನನ್ನು ಕ್ಷಮಿಸಿ ನಶ್ವರ ಐಶ್ವರ್ಯ ಅಪೇಕ್ಷಿಸಿದ್ದು ತಪ್ಪು’ ಎಂದು ದೀಕ್ಷಿತರ ಮಡದಿ ಪಶ್ಚಾತ್ತಾಪ ಪಟ್ಟರಂತೆ. ಇದರಿಂದ ಸಂತುಷ್ಟಗೊಂಡ ದೀಕ್ಷಿತರು ಮತ್ತೆ ಮಹಾಲಕ್ಷ್ಮಿಯ ಕುರಿತು ‘ಮಂಗಳ ದೇವತಾಯ ತ್ವಯಾ ಬಹುಮಾನಿತೋಹಂ’ ಎಂದು ‘ಧನ್ಯಾಸಿ’ರಾಗದಲ್ಲಿ ಕೃತಿ ರಚಿಸಿ ಹಾಡಿದರೆಂದು ಪ್ರತೀತಿಯಿದ.
(ಹಿರಣ್ಮಯೀಂ ಲಕ್ಷ್ಮೀಂ ಎಂಬ ಪದ ಶ್ರೀಸೂಕ್ತದ ಮೊದಲನೆಯ ಶ್ಲೋಕದಲ್ಲಿರುವ ಪದವನ್ನು ಹೋಲುತ್ತದೆ. ದೀಕ್ಷಿತರಿಗೆ ವೇದ-ಮಂತ್ರ-ಶ್ಲೋಕಗಳೆಲ್ಲವೂ ಕಂಠಪಾಠಸ್ಥವಾದ ಕಾರಣ ಇಂಥಹ ಪದ ಬಳಕೆ ಆಗಿರಬಹುದೆಂದು ಕಾಣುತ್ತದೆ. ಶ್ರೀ ಸೂಕ್ತದ ಆ ಶ್ಲೋಕದ ಭಾಗ ಇಂತಿವೆ.
ಓಂ|| ಹಿರಣ್ಯವರ್ಣಾಂ ಹರಿಣೀಂ ಸುವರ್ಣರಜತಸ್ರಜಾಮ್|
ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವಾದೋ ಮ ಆವಹ||)
ಸ್ಥೂಲವಾಗಿ ಎರಡೂ ಕೃತಿಗಳನ್ನು ನೋಡಿದರೆ ಸಾಹಿತ್ಯ ಹಾಗೂ ಸಂಗೀತದ ದೃಷ್ಟಿಯಿಂದ ಉತ್ಕøಷ್ಟ ವಾದುದೇ ಸರಿ. ದೀಕ್ಷಿತರ ಕೃತಿಗಳ ವಿಶೇಷವೆಂದರೆ ಅವರು ಯಾವ ದೇವ-ದೇವಿಯರ ಕುರಿತು ಕೃತಿ ರಚಿಸುತ್ತಾರೋ ಆ ಕೃತಿಯಲ್ಲಿ ಆಯಾ ದೇವತೆಗಳಿಗೆ ಸಂಬಂಧಪಟ್ಟ ಎಲ್ಲಾ ಅಂಶಗಳು ಅಡಕವಾಗಿರುತ್ತದೆ.
ಇವರ ಲಕ್ಷ್ಮೀಪರ ಕೃತಿಗಳು ಸುಮಾರು ಒಂಭತ್ತು ಇದೆ. ಕರ್ನಾಟಕ ಸಂಗೀತದ ಇತರ ವಾಗ್ಗೇಯಕಾರರಾದ ಶ್ರೀಮುತ್ತಯ್ಯ ಭಾಗವತರು, ಶ್ರೀಮೈಸೂರು ವಾಸುದೇವಾಚಾರ್ಯರು ಹಾಗೂ ಶ್ರೀಜಯಚಾಮರಾಜೇಂದ್ರ ಒಡೆಯರು ಮುಂತಾದ ವರು ಲಕ್ಷ್ಮೀಪರ ಕೃತಿಗಳನ್ನು ರಚಿಸಿದ್ದರೂ ಸಂಖ್ಯೆಯ ದೃಷ್ಟಿಯಿಂದಲೂ, ಸಂಗೀತದ ದೃಷ್ಟಿಯಿಂದಲೂ ಮತ್ತು ಪ್ರಗಲ್ಭ ಪಾಂಡಿತ್ಯದ ದೃಷ್ಟಿಯಿಂದಲೂ ನೋಡಿದರೆ ದೀಕ್ಷಿತರ ಕೃತಿಗೆ ದೀಕ್ಷಿತರ ಕೃತಿಗಳೇ ಸಾಟಿ.
ದೀಕ್ಷಿತರು ಸಂಸಾರಿಯಾಗಿದ್ದುಕೊಂಡು ಸಂನ್ಯಾಸಿಯಾಗಿದ್ದವರು. ಹಾಗಾಗಿ ಇವರ ಕೃತಿಗಳು ಜ್ಞಾನ-ಭಕ್ತಿ-ವೈರಾಗ್ಯಗಳಿಂದ ಸಮ್ಮಿಲಿತವಾಗಿದೆ. ಅದಕ್ಕೆ ಉದಾಹರಣೆಯೆಂಬಂತೆ ಒಮ್ಮೆ ದೀಕ್ಷಿತರ ಮಡದಿಗೆ ಧನ-ಕನಕದ ಮೇಲೆ ಮೋಹ ಉಂಟಾಯಿತಂತೆ. ಅವರು ದೀಕ್ಷಿತರನ್ನು ಕುರಿತು ‘ನೀವು ತಂಜಾವೂರು ಮಹಾರಾಜರನ್ನು ಕುರಿತು ಕೃತಿ ರಚಿಸಿ ಆಸ್ಥಾನ ದಲ್ಲಿ ಹಾಡಿದರೆ ನಮಗೆ ದುಡ್ಡು ಒಡವೆ ಕೊಡಬಹುದು’ ಎಂದು ಸೂಚಿಸಿದರಂತೆ. ಆದರೆ ದೀಕ್ಷಿತರು ಮಹಾವಿರಕ್ತರು ಎಂದೂ ನರಸ್ತುತಿ ಮಾಡಿದವರಲ್ಲ. ‘ನಾನು ಆ ರೀತಿ ಎಂದೂ ಮಾಡುವುದಿಲ್ಲ ನಿನಗೆ ಐಶ್ವರ್ಯ ಬೇಕಾದರೆ ದೇವರನ್ನು ಪ್ರಾರ್ಥಿಸುತ್ತೇನೆ’ ಎಂದು ಮಹಾಲಕ್ಷ್ಮಿಯ ಕುರಿತು ‘ಲಲಿತಾ’ರಾಗದಲ್ಲಿ ‘ಹಿರಣ್ಮಯಿಂ ಲಕ್ಷ್ಮೀಂ ಸದಾ ಭಜಾಮಿ ಹೀನ ಮಾನವಾಶ್ರಯಾಂ ತ್ಯಜಾಮಿ’ ಎಂಬ ಕೃತಿ ರಚಿಸಿದರಂತೆ. ಅದೇ ದಿನ ರಾತ್ರಿ ದೀಕ್ಷಿತರ ಮಡದಿ ಕನಸಿನಲ್ಲಿ ಮಹಾಲಕ್ಷ್ಮಿ ಕಾಣಿಸಿಕೊಂಡು ಒಡವೆಗಳು ಸಾಕೇ ಎಂದು ಕೇಳಿದಂತಾಯಿತಂತೆ. ಮರುದಿನ ಬೆಳಿಗ್ಗೆ ‘ನನ್ನನ್ನು ಕ್ಷಮಿಸಿ ನಶ್ವರ ಐಶ್ವರ್ಯ ಅಪೇಕ್ಷಿಸಿದ್ದು ತಪ್ಪು’ ಎಂದು ದೀಕ್ಷಿತರ ಮಡದಿ ಪಶ್ಚಾತ್ತಾಪ ಪಟ್ಟರಂತೆ. ಇದರಿಂದ ಸಂತುಷ್ಟಗೊಂಡ ದೀಕ್ಷಿತರು ಮತ್ತೆ ಮಹಾಲಕ್ಷ್ಮಿಯ ಕುರಿತು ‘ಮಂಗಳ ದೇವತಾಯ ತ್ವಯಾ ಬಹುಮಾನಿತೋಹಂ’ ಎಂದು ‘ಧನ್ಯಾಸಿ’ರಾಗದಲ್ಲಿ ಕೃತಿ ರಚಿಸಿ ಹಾಡಿದರೆಂದು ಪ್ರತೀತಿಯಿದ.
(ಹಿರಣ್ಮಯೀಂ ಲಕ್ಷ್ಮೀಂ ಎಂಬ ಪದ ಶ್ರೀಸೂಕ್ತದ ಮೊದಲನೆಯ ಶ್ಲೋಕದಲ್ಲಿರುವ ಪದವನ್ನು ಹೋಲುತ್ತದೆ. ದೀಕ್ಷಿತರಿಗೆ ವೇದ-ಮಂತ್ರ-ಶ್ಲೋಕಗಳೆಲ್ಲವೂ ಕಂಠಪಾಠಸ್ಥವಾದ ಕಾರಣ ಇಂಥಹ ಪದ ಬಳಕೆ ಆಗಿರಬಹುದೆಂದು ಕಾಣುತ್ತದೆ. ಶ್ರೀ ಸೂಕ್ತದ ಆ ಶ್ಲೋಕದ ಭಾಗ ಇಂತಿವೆ.
ಓಂ|| ಹಿರಣ್ಯವರ್ಣಾಂ ಹರಿಣೀಂ ಸುವರ್ಣರಜತಸ್ರಜಾಮ್|
ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವಾದೋ ಮ ಆವಹ||)
ಸ್ಥೂಲವಾಗಿ ಎರಡೂ ಕೃತಿಗಳನ್ನು ನೋಡಿದರೆ ಸಾಹಿತ್ಯ ಹಾಗೂ ಸಂಗೀತದ ದೃಷ್ಟಿಯಿಂದ ಉತ್ಕøಷ್ಟ ವಾದುದೇ ಸರಿ. ದೀಕ್ಷಿತರ ಕೃತಿಗಳ ವಿಶೇಷವೆಂದರೆ ಅವರು ಯಾವ ದೇವ-ದೇವಿಯರ ಕುರಿತು ಕೃತಿ ರಚಿಸುತ್ತಾರೋ ಆ ಕೃತಿಯಲ್ಲಿ ಆಯಾ ದೇವತೆಗಳಿಗೆ ಸಂಬಂಧಪಟ್ಟ ಎಲ್ಲಾ ಅಂಶಗಳು ಅಡಕವಾಗಿರುತ್ತದೆ.
‘ಲಲಿತಾ’ರಾಗದ (ಹಿರಣ್ಮಯಿಂ ಲಕ್ಷ್ಮಿಂ) ಕೃತಿಯಲ್ಲಿ ಸ್ವರ್ಣಮಯಳಾದ ಲಕ್ಷ್ಮೀದೇವಿಯನ್ನು ಸದಾ ಭಜಿಸುತ್ತೇನೆಯೇ ಹೊರತು ಹುಲು ಮಾನವರನ್ನು ಆಶ್ರಯಿಸುವುದಿಲ್ಲ. ನಾಶರಹಿತವಾದ ಸಂಪತ್ತನ್ನು ಅನುಗ್ರಹಿಸುವ, ಕ್ಷೀರಸಾಗರನ ಮಗಳಾದ, ಹರಿವಕ್ಷಸ್ಥಳದಲ್ಲಿ ವಾಸವಾಗಿರುವ, ಭೂತ-ಭವಿಷ್ಯಗಳನ್ನು ಲೀಲಾ ಮಾತ್ರದಿಂದ ನಡೆಸುವ, ಬ್ರಾಹ್ಮಣರಿಂದ ಪೂಜೆಗೊಳ್ಳುವ, ಶೀತಕಿರಣವನ್ನು ಸೂಸುವ ಚಂದ್ರನ ಮುಖಾರವಿಂದವುಳ್ಳ, ಸುಬ್ರಹ್ಮಣ್ಯನ ಮಾವನ ಮಡದಿಯಾದ ಮಹಾಲಕ್ಷ್ಮಿಯನ್ನು ಧ್ಯಾನಿಸುತ್ತೇನೆ ಎಂದರೆ. ‘ಧನ್ಯಾಸಿ’ರಾಗದ (ಮಂಗಳ ದೇವತಾಯ)ಕೃತಿಯಲ್ಲಿ ಮಂಗಳದೇವತೆಯು ನನಗೆ ಬಹುಮಾನಿಸಿದಳು. ಭೋಗ-ಭಾಗ್ಯವನ್ನು ಅನುಗ್ರಹಿಸುವ, ಜಂಗಮ ಸ್ಥಾವರ ಲೋಕದ ಸೃಷ್ಟಿ-ಸ್ಥಿತಿ-ಲಯಗಳನ್ನು ನಿಯಂತ್ರಿಸುವ, ಹರಿದ್ರಾ ಕುಂಕುಮ ಸುಶೋಭತೆ, ದರಿದ್ರಾದಿ ದು:ಖ ನಿವಾರಿತೆ, ವರದರಾಜ ಗೋಪಾಲ ಹೃದಯ ನಿವಾಸಿತೆ ಮಹಾಲಕ್ಷ್ಮಿಯನ್ನು ನಮಿಸುತ್ತೇನೆ ಎಂದು ಸ್ತುತಿಸಿದ್ದಾರೆ.
ದೀಕ್ಷಿತರು ವಾಗ್ಗೇಯಮುದ್ರೆ (ಅಂಕಿತನಾಮ – ಗುರುಗುಹ) ಮತ್ತು ರಾಗಮುದ್ರೆ(ರಾಗದ ಹೆಸರು) ಕೃತಿಯಲ್ಲಿ ಚಮತ್ಕಾರವಾಗಿ ಕೃತಿಯಲ್ಲಿ ಜೋಡಿಸುವುದರಲ್ಲಿ ಸಿದ್ಧಹಸ್ತರು. ‘ಲಲಿತಾ’ರಾಗದ ‘ಹಿರಣ್ಮಯಿಂ ಲಕ್ಷ್ಮಿಂ’ ಎಂಬ ಕೃತಿಯಲ್ಲಿ ರಾಗಮುದ್ರೆಯು ಕೃತಿ ಕೊನೆಗೆ ಗುರುಗುಹ ಮಾತುಲ ಕಾಂತಾಂ ಲಲಿತಾಂ ಎಂದರೆ. ‘ಧನ್ಯಾಸಿ’ ರಾಗದ ‘ಮಂಗಳ ದೇವತಾಯಾ’ ಕೃತಿಯಲ್ಲಿ ರಾಗಮುದ್ರೆಯು ಸಾಹಿತ್ಯಕ್ಕೆ ನೇರವಾಗಿ ಹೊಂದುವುದು ಅಸಾಧ್ಯವಾದಾಗ ಚಮತ್ಕಾರವಾಗಿ ಮೂರ್ಧನ್ಯಾಶಿವನಿಗ್ರಹಯಾ ಎಂದು ಜಾಣ್ಮೆ ಮೆರೆದಿದ್ದಾರೆ.
ದೀಕ್ಷಿತರು ವಾಗ್ಗೇಯಮುದ್ರೆ (ಅಂಕಿತನಾಮ – ಗುರುಗುಹ) ಮತ್ತು ರಾಗಮುದ್ರೆ(ರಾಗದ ಹೆಸರು) ಕೃತಿಯಲ್ಲಿ ಚಮತ್ಕಾರವಾಗಿ ಕೃತಿಯಲ್ಲಿ ಜೋಡಿಸುವುದರಲ್ಲಿ ಸಿದ್ಧಹಸ್ತರು. ‘ಲಲಿತಾ’ರಾಗದ ‘ಹಿರಣ್ಮಯಿಂ ಲಕ್ಷ್ಮಿಂ’ ಎಂಬ ಕೃತಿಯಲ್ಲಿ ರಾಗಮುದ್ರೆಯು ಕೃತಿ ಕೊನೆಗೆ ಗುರುಗುಹ ಮಾತುಲ ಕಾಂತಾಂ ಲಲಿತಾಂ ಎಂದರೆ. ‘ಧನ್ಯಾಸಿ’ ರಾಗದ ‘ಮಂಗಳ ದೇವತಾಯಾ’ ಕೃತಿಯಲ್ಲಿ ರಾಗಮುದ್ರೆಯು ಸಾಹಿತ್ಯಕ್ಕೆ ನೇರವಾಗಿ ಹೊಂದುವುದು ಅಸಾಧ್ಯವಾದಾಗ ಚಮತ್ಕಾರವಾಗಿ ಮೂರ್ಧನ್ಯಾಶಿವನಿಗ್ರಹಯಾ ಎಂದು ಜಾಣ್ಮೆ ಮೆರೆದಿದ್ದಾರೆ.
ದೀಕ್ಷಿತರು ಸಂಗೀತದಷ್ಟೇ ಸಾಹಿತ್ಯಕ್ಕೂ ಪ್ರಾಮುಖ್ಯತೆ ಕೊಡುತ್ತಾರೆ. ಹಾಗಾಗಿ ದೀಕ್ಷಿತರ ಕೃತಿಗಳಲ್ಲಿ ಆದಿಪ್ರಾಸ, ಅಂತ್ಯಪ್ರಾಸ, ಅಲಂಕಾರಗಳು ಮುಂತಾದ ಪ್ರಯೋಗಗಳನ್ನು ಮಾಡುತ್ತಾರೆ. ಈ ಪ್ರಯೋಗವನ್ನು ಮಹಾಲಕ್ಷ್ಮಿಯನ್ನು ಕುರಿತ ಅವರ ಇನ್ನೊಂದು ಕೃತಿ ‘ಮಾಧವ ಮನೋಹರಿ’ರಾಗದ ‘ಮಹಾಲಕ್ಷ್ಮಿಕರುಣಾ ರಸಲಹರಿ ಮಾಮವ ಮಾಧವ ಮನೋಹರಿ’ ಕೃತಿಯಲ್ಲಿ ಕಾಣಬಹುದು. ಈ ಕೃತಿಯು ಆದಿಪ್ರಾಸಗಳಿಂಧಲೂ, ಅಂತ್ಯಪ್ರಾಸಗಳಿಂದಲೂ ಕೂಡಿ ಸಾಹಿತ್ಯ ಮತ್ತು ಸಂಗೀತದ ಉಡುಗೆಯನ್ನು ಉಟ್ಟು ಸರ್ವಾಲಂಕಾರ ಭೂಷಿತವಾಗಿದೆ. ಹೆಚ್ಚು ಪ್ರಚಾಲಿತದಲ್ಲಿಲ್ಲದ ಈ ಕೃತಿಯಲ್ಲಿ ಮಹಾಲಕ್ಷ್ಮಿಯನ್ನು ದೀಕ್ಷಿತರು ಕರುಣರಸ ಲಹರಿ ಎಂದು ಸಂಭೋದಿಸಿದ್ದಾರೆ. ಮಹಾವಿಷ್ಣು ವಕ್ಷಸ್ಥಳ ವಾಸಿನಿ, ಮಹಾದೇವ ಗುರುಗುಹ ವಿಶ್ವಾಸಿನಿ, ಮಹಾಪಾಪ ಶಮನಿ, ಮಾರ ಜನನಿ, ಮಂಗಳ ಪ್ರದಾಯಿನಿ ಎಂದು ಪಲ್ಲವಿ ಮತ್ತು ಅನುಪಲ್ಲವಿಯಲ್ಲಿ ಮಹಾ ಎಂಬ ಪದದಿಂದ ಕೂಡಿ ಆದಿಪ್ರಾಸ ಬರುವಂತೆ ರಚಿಸಿದ್ದಾರೆ. ಚರಣದಲ್ಲಿ ಸುತೇ, ನುತೇ, ಮಹಿತೇ, ಸಹಿತೇ, ಪೂಜಿತೇ, ವಿರಾಜಿತೇ, ನಮಸ್ತೇ ಎಂಬ ಅಕ್ಷರಗಳಿಂದ ಕೂಡಿದ ಅಂತ್ಯಪ್ರಾಸದಲ್ಲಿದೆ. ಹಾಗಾಗಿ ಕೃತಿಯ ಸೊಬಗಿನ ಸಾಹಿತ್ಯವನ್ನು, ಲಾವಣ್ಯದ ರಾಗದ ನಡೆಯನ್ನು ಕೃತಿಯನ್ನು ಕೇಳಿಯೇ ಆಸ್ವಾದಿಸಬೇಕು.
ಇನ್ನು ‘ಮಂಗಳ ಕೈಶಿಕಾ’ ಎಂಬ ಬಲು ಅಪರೂಪದ ಪ್ರಾಚೀನ ರಾಗದಲ್ಲಿ ಲಕ್ಷ್ಮಿಕೃತಿಯನ್ನು ದೀಕ್ಷಿತರು ರಚಿಸಿದ್ದರೆ. ಇದು ಅವರ ಕ್ಷೇತ್ರ ಪರ್ಯಟನಾ ಸಂದರ್ಭದಲ್ಲಿ ಶ್ರೀರಂಗಂ ದೇವಾಲಯದಲ್ಲಿರುವ ಶ್ರೀರಂಗನಾಯಕ ಸ್ವಾಮಿಯ ಪತ್ನಿ ಶ್ರೀರಂಗಧಾಮೇಶ್ವರಿಯ ಕುರಿತ ಸ್ತುತಿ ಗೀತೆ. ಇಲ್ಲಿ ಪಲ್ಲವಿಯಲ್ಲಿ ‘ಶ್ರೀಭಾರ್ಗವಿ ಭದ್ರಮೇ ದಿಶತು ಶ್ರೀರಂಗಧಾಮೇಶ್ವರಿ’ ಎಂದರೆ, ಅನುಪಲ್ಲವಿಯಲ್ಲಿ ‘ಸೌಭಾಗ್ಯಲಕ್ಷ್ಮಿಂ ಸತತಂ ಮಾಮವ ಸಕಲಲೋಕ ಜನನಿ ವಿಷ್ಣುಮೋಹಿನಿ’ ಎಂದು ಸ್ತುತಿಸಿದ್ದಾರೆ. ಚರಣದಲ್ಲಿ ಮದನಗುರು ಮಾನಿನಿ, ಮಂಗಳಕೈಶಿಕಾ ನಿವಾಸಿನಿ, ಪದ್ಮಗಳಂಥಹ ಕಣ್ಣುಗಳುಳ್ಳ ನಳಿನಿ, ಹರಿ ಪ್ರಣಯಿನಿ, ರಂಗನಾಥನ ರಮಣೀ ಎಂದು ಭಜಿಸಿದ್ದಾರೆ.
ಇನ್ನು ‘ಮಂಗಳ ಕೈಶಿಕಾ’ ಎಂಬ ಬಲು ಅಪರೂಪದ ಪ್ರಾಚೀನ ರಾಗದಲ್ಲಿ ಲಕ್ಷ್ಮಿಕೃತಿಯನ್ನು ದೀಕ್ಷಿತರು ರಚಿಸಿದ್ದರೆ. ಇದು ಅವರ ಕ್ಷೇತ್ರ ಪರ್ಯಟನಾ ಸಂದರ್ಭದಲ್ಲಿ ಶ್ರೀರಂಗಂ ದೇವಾಲಯದಲ್ಲಿರುವ ಶ್ರೀರಂಗನಾಯಕ ಸ್ವಾಮಿಯ ಪತ್ನಿ ಶ್ರೀರಂಗಧಾಮೇಶ್ವರಿಯ ಕುರಿತ ಸ್ತುತಿ ಗೀತೆ. ಇಲ್ಲಿ ಪಲ್ಲವಿಯಲ್ಲಿ ‘ಶ್ರೀಭಾರ್ಗವಿ ಭದ್ರಮೇ ದಿಶತು ಶ್ರೀರಂಗಧಾಮೇಶ್ವರಿ’ ಎಂದರೆ, ಅನುಪಲ್ಲವಿಯಲ್ಲಿ ‘ಸೌಭಾಗ್ಯಲಕ್ಷ್ಮಿಂ ಸತತಂ ಮಾಮವ ಸಕಲಲೋಕ ಜನನಿ ವಿಷ್ಣುಮೋಹಿನಿ’ ಎಂದು ಸ್ತುತಿಸಿದ್ದಾರೆ. ಚರಣದಲ್ಲಿ ಮದನಗುರು ಮಾನಿನಿ, ಮಂಗಳಕೈಶಿಕಾ ನಿವಾಸಿನಿ, ಪದ್ಮಗಳಂಥಹ ಕಣ್ಣುಗಳುಳ್ಳ ನಳಿನಿ, ಹರಿ ಪ್ರಣಯಿನಿ, ರಂಗನಾಥನ ರಮಣೀ ಎಂದು ಭಜಿಸಿದ್ದಾರೆ.
ದೀಕ್ಷಿತರ ಕೃತಿಗಳೆಲ್ಲವೂ ದೇವ-ದೇವಿಯರ ಸ್ತೋತ್ರರೂಪಗಳು ಮತ್ತು ನಾಮಾವಳಿಗಳಾಗಿವೆ ಸ್ತೋತ್ರಗಳೆ ಲ್ಲವೂ ಸಂಸ್ಕøತದಲ್ಲಿರುವುದರಿಂದ ಇವರ ಕೃತಿಗಳೆಲ್ಲವೂ ಸಂಸ್ಖøತದಲ್ಲಿವೆ. ದೀಕ್ಷಿತರಿಗೆ ಸ್ತೋತ್ರಗಳೆಲ್ಲವೂ ಕಂಠಪಾಠಸ್ಥವೆಂದು ಕಾಣುತ್ತದೆ. ಇವರು ತಮ್ಮ ಕೃತಿಗಳಲ್ಲಿ ಲಲಿತಾಸಹಸ್ರನಾಮ, ಲಲಿತಾತ್ರಿಶತಿ, ಸೌಂದರ್ಯ ಲಹರಿ, ಆನಂದ ಲಹರಿ ಮುಂತಾದ ಸ್ತೋತ್ರಗಳನ್ನು ಚಮತ್ಕಾರವಾಗಿ ಜೋಡಿಸಿದ್ದಾರೆ. ಅದರಂತೆ ಅವರಿಗೆ ವೃತದ ಕಥೆಗಳೆಲ್ಲವೂ ಕರಗತವೆಂದು ಕಾಣಿಸುತ್ತದೆ. ಇದಕ್ಕೆ ಉದಾಹರಣೆಯಾಗಿ ಸತ್ಯನಾರಾಯಣ ಪೂಜಾ ವೃತಕ್ಕೆ (ಶ್ರೀ ಸತ್ಯನಾರಾಯಣಂ ಉಪಾಸ್ಮಹೇ ಹಂ - ಶಿವಪಂತುವರಾಳಿ ರಾಗ) , ಸಂತಾನ ಗೋಪಾಲಕೃಷ್ಣ ವೃತಕ್ಕೆ (ಸಂತಾನ ಗೋಪಾಲಕೃಷ್ಣಂ ಉಪಾಸ್ಮಹೇ – ಕಮಾಸ್ ರಾಗ ) , ವರಸಿದ್ಧಿವಿನಾ ಯಕ ವೃತಕ್ಕೆ (ಸಿದ್ದಿವಿನಾಯಕಂ ಅನಿಶಂ ಚಿಂತಯಾಮ್ಯಹಂ - ಷಣ್ಮಖಪ್ರಿಯ ರಾಗ) ಹಾಗೂ ವಿಶೇಷವಾಗಿ ವರಲಕ್ಷ್ಮೀಪೂ ಜಾ ವೃತಕ್ಕೂ ಒಂದು ಕೃತಿಯನ್ನು ರಚಿಸಿದ್ದಾರೆ.
ಮಂಗಳರಾಗವೆಂದೇ ಪ್ರಸಿದ್ಧವಾದ ‘ಶ್ರೀರಾಗ’ದಲ್ಲಿ ಶ್ರೀವರಮಹಾಲಕ್ಷ್ಮಿ ವೃತಕ್ಕೋಸ್ಕರ ‘ಶ್ರೀ ವರಲಕ್ಷ್ಮೀಂ ನಮಸ್ತುಭ್ಯಂ’ ಎಂಬ ಕೃತಿಯನ್ನು ರಚಿಸಿದ್ದಾರೆ. ಶ್ರಾವಣ ಪೌರ್ಣಿಮೆಯ ಹತ್ತಿರದ ಶುಕ್ರವಾರ ಈ ವೃತವನ್ನು ಆಚರಿಸಬೇಕು, ಚಾರುಮತಿ ಎಂಬ ಸಾದ್ವಿಯೊಬ್ಬಳು ಈ ವೃತವನ್ನು ಮಾಡಿ ಮಹಾಲಕ್ಷ್ಮಿಯ ಕೃಪಾಕಟಾಕ್ಷಕೆ ಒಳಗಾದಳು ಎಂದು ವೃತದ ಕಥೆ ಹಾಗೂ ನಿಯಮಗಳನ್ನು ಕೃತಿಯಲ್ಲಿ ಸ್ಥೂಲವಾಗಿ ತಿಳಿಸಿರುವುದು ದೀಕ್ಷಿತರ ಜಾಣ್ಮೆ. ದೀಕ್ಷಿತರ ಕೃತಿಗಳಲ್ಲಿ ಏನಾದರೊಂ ದು ವಿಶೇಷವಿದ್ದೇ ಇರುತ್ತದೆ. ಈ ಕೃತಿಯಲ್ಲಿ ಗೋಪುಚ್ಛ ಯತಿಯನ್ನು ಬಳಸಿ ಸಾಹಿತ್ಯ ರಚಿಸಿದ್ದಾರೆ. ಗೋಪುಚ್ಛ ಯತಿಯಲ್ಲಿ ಅಕ್ಷರಗಳು ಕ್ರಮವಾಗಿ ಏಕಪ್ರಕಾರವಾಗಿ ಕಡಿಮೆಯಾಗುತ್ತಾ ಬಂದು ಸಾಹಿತ್ಯದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆ ಸಾಹಿ ತ್ಯದ ಭಾಗ ಇಂತಿವೆ ‘ಸಾರಸಪದೇ, ರಸಪದೇ, ಸಪದೇ, ಪದೇ ಪದೇ’ ಎಂದು ಸೊಗಸಾಗಿ ರಚಿಸಿದ್ದಾರೆ.
ಮಂಗಳರಾಗವೆಂದೇ ಪ್ರಸಿದ್ಧವಾದ ‘ಶ್ರೀರಾಗ’ದಲ್ಲಿ ಶ್ರೀವರಮಹಾಲಕ್ಷ್ಮಿ ವೃತಕ್ಕೋಸ್ಕರ ‘ಶ್ರೀ ವರಲಕ್ಷ್ಮೀಂ ನಮಸ್ತುಭ್ಯಂ’ ಎಂಬ ಕೃತಿಯನ್ನು ರಚಿಸಿದ್ದಾರೆ. ಶ್ರಾವಣ ಪೌರ್ಣಿಮೆಯ ಹತ್ತಿರದ ಶುಕ್ರವಾರ ಈ ವೃತವನ್ನು ಆಚರಿಸಬೇಕು, ಚಾರುಮತಿ ಎಂಬ ಸಾದ್ವಿಯೊಬ್ಬಳು ಈ ವೃತವನ್ನು ಮಾಡಿ ಮಹಾಲಕ್ಷ್ಮಿಯ ಕೃಪಾಕಟಾಕ್ಷಕೆ ಒಳಗಾದಳು ಎಂದು ವೃತದ ಕಥೆ ಹಾಗೂ ನಿಯಮಗಳನ್ನು ಕೃತಿಯಲ್ಲಿ ಸ್ಥೂಲವಾಗಿ ತಿಳಿಸಿರುವುದು ದೀಕ್ಷಿತರ ಜಾಣ್ಮೆ. ದೀಕ್ಷಿತರ ಕೃತಿಗಳಲ್ಲಿ ಏನಾದರೊಂ ದು ವಿಶೇಷವಿದ್ದೇ ಇರುತ್ತದೆ. ಈ ಕೃತಿಯಲ್ಲಿ ಗೋಪುಚ್ಛ ಯತಿಯನ್ನು ಬಳಸಿ ಸಾಹಿತ್ಯ ರಚಿಸಿದ್ದಾರೆ. ಗೋಪುಚ್ಛ ಯತಿಯಲ್ಲಿ ಅಕ್ಷರಗಳು ಕ್ರಮವಾಗಿ ಏಕಪ್ರಕಾರವಾಗಿ ಕಡಿಮೆಯಾಗುತ್ತಾ ಬಂದು ಸಾಹಿತ್ಯದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆ ಸಾಹಿ ತ್ಯದ ಭಾಗ ಇಂತಿವೆ ‘ಸಾರಸಪದೇ, ರಸಪದೇ, ಸಪದೇ, ಪದೇ ಪದೇ’ ಎಂದು ಸೊಗಸಾಗಿ ರಚಿಸಿದ್ದಾರೆ.
ಇವಿಷ್ಟಲ್ಲದೆ ‘ಸೌರಾಷ್ಟ್ರ’ರಾಗದಲ್ಲಿ ‘ವರಲಕ್ಷ್ಮೀಂ ಭಜರೇರೇ’ , ‘ಹೇಮಾವತಿ’ರಾಗದಲ್ಲಿ ‘ಹರಿಯುವತೀಂ ಹೈಮವತೀಂ’ ಹಾಗೂ ‘ಮಾರ್ಗದೇಶಿ’ರಾಗದಲ್ಲಿ ‘ಮಂಗಳ ದೇವತೇ ಪರದೇವತೇ’ ಎಂಬ ಮಹಾಲಕ್ಷ್ಮೀ ಪರ ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗಳಲ್ಲಿ ಭಕ್ತಿಯ ಗಾಢ ಪರವಶತೆಯಿದ್ದು ಕೇಳುಗರ ಹೃದಯದಲ್ಲಿ ಅವ್ಯಕ್ತ ಆನಂದವನ್ನುಂಟು ಮಾಡುವ ಶಕ್ತಿಯಿದೆ. ಇಂದು ದೀಕ್ಷಿತರು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಅವರ ಕೃತಿಗಳ ಮೂಲಕ ಇನ್ನೂ ಜೀವಂತ ವಾಗಿದ್ದಾರೆ. ಅವರ ಕೃತಿಗಳು ಎಂದಿನ ತನಕ ಈ ಭೂಮಿಯ ಮೇಲೆ ಇರುತ್ತದೋ ಅಂದಿನ ತನಕ ದೀಕ್ಷಿತರು ನಮ್ಮೊಂದಿಗೆ ಶಾಶ್ವತವಾಗಿರುತ್ತಾರೆ ಎಂದುಕೊಳ್ಳುತ್ತಾ ಸರ್ವಮಂಗಳಕಾರಿಣಿಯಾದ ಮಹಾಲಕ್ಷ್ಮಿಯು ಸಕಷ್ಟೈಶ್ವರ್ಯವನ್ನು, ಆರೋಗ್ಯವನ್ನು , ಮನಃಶಾಂತಿಯನ್ನು ದಯಪಾಲಿಸಲೆಂದು ಭಕ್ತಿಯಿಂದ ಬೇಡಿಕೊಳ್ಳೋಣ.
No comments:
Post a Comment